ಶನಿ ಮಾಹಾತ್ಮೆ 2

‌‌‌‍‌‌ಬಲ್ಲೆ ಬಲ್ಲೆನು ನಿನ್ನ ಬಹಳ ಪ್ರತಾಪವ  ಎಲ್ಲ್ಲೆಲ್ಲೂ ಕಾಲು ಕಾದೀ
ಬಲ್ಲಿದ ವರ ನೀನು ಬಲು ಭಂಗ ಪಡಿಸಿದೆ ನಿಲ್ಲೋ ಶನೇಶವರನೆ.
ಹರಿಹರ ಬ್ರಹ್ಮ ದೇವತೆಗಳ ನಿಲ್ಲಿಸಿದೆ ಕರುಣ ನಿನಗೊಂದಿಸ್ಟಿಲ್ಲ
ಹರಿಶ್ಚಂದ್ರ ನಳ ಚಕ್ರವರ್ತಿಯ ಸೋಲಿಸಿದಂತ ವರಪಾಂಡವರ ನಿಲ್ಲಿಸಿದೆ
ಇದ್ದದ್ದು ಫಲವೇನು ಸಕಲ ವಿಷಯಾಂಗಳಿಗೆ ಮುದ್ದಾರಿಪು ಮಾಡದೆ
ಮುದ್ದು ಮಾತುಗಳಾಡುವ ಸತಿಯು ಎನಗೆ ಬದ್ಧ ದೇಷಿಯು ಆದಳು
ಒಳೆಯವರಾಗಿದ್ದ ಸಂಗಾತಿಯರ ಸ್ನೇಹ ಎಲ್ಲಾಹೋಗಿ ಕೇಡಿಸಿದೀ
ಬಲ್ಲಿದ ವರ ನೀನು ಅಲ್ಲೆಹೋಗಿ ನೆಲಸಿ ಇಲ್ಲ ಹೊಗೆದೆನಿಸಿದಿ
ದೇಶದಿ ಪತಿಗೆ ಅಂಜದೆ ಪೊಗಿ ಪರದೇಶಿಯನ್ನನು ಮಾಡಿದೀ
ದೇಶವಬಿಟ್ಟು ಕಾಶಿಗೆ ಹೋದರೆ ಅಲ್ಲೇ ವಾಸವಾಗಿ ನೆಲಸಿದೀ
ದೇಶದಿ ವಾಸನೆ ಶ್ರೀವೆಂಕಟೇಶನೇ ಲೇಸು ಪಾಲಿಸು ಎಮ್ಮಾನೂ
ಲೇಸು ಪಾಲಿಸು ಎನ್ನನು ಹೇಳವನ ಕಟ್ಟೆ ರಂಗ ನಾಥ ಎನ್ನನು ಸಲಹೋ

ಉಂಡಳಿಗೆ ಹೂರಣವು ಸಕ್ಕರೆಯು ಕಡುಕಬ್ಬು
ಒಬ್ಬಟ್ಟು ಹೋಳಿಗೆ ದೋಸೆ ಕಡುಬುಗಳು
ಸೊಂಡಿಲಾ ಗಣಪನಿಗೆ ನೈವೇದ್ಯಕೆ ನೀಡುವೇನು
ಈಶ್ವರನು ನೀನೇ ಜಗದೀಶ್ವರನು ನೀನೇ
ಕೋಟಿ ಈಶ್ವರನು ನೀನೇ ಶನೇಶ್ವರನು ನೀನೇ
ಬಂದ ಶನಿರಾಯನಿಗೆ ಕಂಡು ಕರಗಳನೆ ಮುಗಿದು
ಒಂದನೆಯನೇ ಮಾಡಿ ಬೇಸಗೊಂಡು ಕೇಳೆದಳು

ಯಾಕಯ್ಯ ಶನಿರಾಯ ಕೋಪಿಸಿ ಕೊಳಬೇಡ
ಆಕಳ ತುಪ್ಪದಲಿ ದೀಪ ಹಚ್ಚುವೆನು
ಮಕ್ಕಳನು ಮರಿಗಳನು ಕಷ್ಟಪಡಿಸಲುಬೇಡ
ಉಟ್ಟ ಸೀರೆಗಳನು ಮಟ್ಟು ಮಾಡುವರೆ.
ನಿನ್ನಹೆಸರಿನ ಮೇಲೆ ಒಳ್ಳೆಯ ಬ್ರಾಹ್ಮಣನಿಗೆ
ಎಣ್ಣೆಯ ನಾನೊತ್ತಿ ಬಿಸಿರ ನೆರವೇ
ಸಣ್ಣಕ್ಕಿ ಅನ್ನವನ್ನು ಬೆಣ್ಣೆ ಕಾಸಿದ ತುಪ್ಪ
ಚೆಂದದಿಂ ಅಡುಗೆಯನೇ ಮಾಡಿ ಬಡುಸುವೆನು

ಕರಿಯಲೆಯು ಬಿಳಿಅಡಿಕೆ ಪರಿಮಳದ ಗಂಧವನೆ
ಉಡುಗೊರೆಯನೇ ಕೊಟ್ಟು ಕರಗಳನೆ ಮುಗಿವೆ
ಇನ್ನುಮೇಲೆ ನಾನು ಒಂದುಗಳಿಗಿರುವುದಿಲ್ಲಾ
ನಿಮ್ಮ ಮನೆಗಳ ಬಿಟ್ಟು ಹೊರಟೋಗುತ್ತೀನಿ
ಏಳುರಾಟ ಶನಿಯನು ಊರಿಗೇ ಕಳುಹಿಸಿ
ಬರುವ ಮಾರ್ಗದಲಿ ಭಾಗ್ಯವನೆ ಕಂಡೆ.
ಸಾಲಾಗಿ ಮನೆಕಟ್ಟಿ ಸಾಲವನು ತೀರಿಸಿ
ವರವನ್ನು ಕೊಡುವನು ನಮಗೆ ಶ್ರೀವೆಂಕಟೇಶ

ಆಲಮೇಲು ಮಂಗಪುರಿ ಆದಿನಾರಾಯಣ
ಗೋವರ್ಧನೋದಾರ ಜಾನಕಿವಾಸ ॥ ಶ್ರೀವೆಂಕಟೇಶ

No comments:

Post a Comment