ಶನಿ ಮಹಾತ್ಮೆ.

ಮಂಗಳಾರತಿ ಎತ್ತಿರೆ ಅಂಗನೆಯರು ಮಂಗಳಾರತಿ
ಮಂಗಳಾರತಿ ಎತ್ತಿ ಮಹಾಮಹಿಳೆಯರೆಲ್ಲಾ ಭಂಗ ಹರಿಸಿದಂತ ಶನಿಮಹಾರಾಯಗೆ
ಮಂಗಳಾರತಿ ಎತ್ತಿರೆ

ಭುವನದೊಡೆಯ ವಿಕ್ರಮ ಆಸ್ಥಾನದೊಳ್ಗೆ  ಹವಣಿಸಿ ನುಡಿದನಗ
ನವಗ್ರಹದೊಳಗೆಲ್ಲಾ ಘನವಾದವರಾರು ಸುವೇಕದಿಂದ ನುಡಿದ ಜೋತಿಷ್ಯರೆಲ್ಲಾ.
ಭಾನು ಶ್ರೇಷ್ಠಾನೆನ್ನಾಲು ಮತ್ತೊಬ್ಬನು ವೇಣ್ಣಂಕ ಬುದ ಶ್ರೇಷ್ಠಾ ನು.
ನಾನಾ ಬಗೆಯಲ್ಲಿ ಮಂಗಲ ಬುದು ಗುರು ಶುಕ್ರ ದೀನ ರಾಹು ಕೇತುಗಳೆಂದು ನುಡಿದರು.

ಇವರ ಮಾತಂತಿರಲಿ ಶನಿ ಮಹಾರಾಯ ಪೃಥಿವೀ ಯೋಳು ಅತಿ ಶ್ರೇಷ್ಠಾನು.
ರವಿಗೆಕೋಷ್ಟವನ ಹಚ್ಚಿ ಅರುಣನನ್ನ ಹೇಳವ ಮಾಡಿ
ಜಗದಿ ತಿರುಗೋ ಅಶ್ವ ಕುರುಡನ್ನ ಮಾಡಿದಾ..
ಪಿತಗೆ ಕಷ್ಟವಾ ಕೊಟ್ಟನಂತ ಶನಿ ಮಹಾರಾಯ ಪೃಥಿವೀಯೋಳು ಅತಿ ಭ್ರಷ್ಟಾನು

ಶತ ಪಾಪಿಯಾದ ಭುಪತಿ ನಕ್ಕನೇನೂತಲಿ
ಕ್ಷತಿಗೆ ಮಾನಸ ಪುತ್ರ ಹೀಗೆಂದು ನುಡಿದನು
ಎನ್ನಯ್ಯ ವಿಕ್ರಮನೆ ಏನೇನು ಬಲು ಹೀನವಾಗೆ ಜರಿದೆ
ಏನಾದರಿದೊಂದು ವಿಧದಿಂದ ನಿನ ನೋಯಿಸಿ ಮಾನಹಾನಿ ತರುವೆ ಏನುತಾ ಪೊಗಲೂ

ಅತ್ತಪೋಗಲು ಶನಿಯು ಭುಪತಿಗಾಗ ಚಿತ್ತ ಚಂಚಲವಾಯಿತು
ವ್ಯರ್ಥ ವಾಯಿತಿ ಶನಿ ದೇವರ ಪೂಜಿಸು ಎಂದರುತ್ತಮರು ನುಡಿದರು ವಿಕ್ರಮನಿಗೆ
ಕಾಯವ ಮರಿಸಿ ಕೊಂಡು ಶನಿದೇವರು ಮಾಯಾ ಅಶ್ವವಾನೆತಂದು
ಉಪಾಯದಿಂದ್ ಕೋಡಲಗ ನೋಡುವೆನೇನೂತಲಿ ರಾಯನೇರಲು ತೇಜಿ ಹಾರಿತು ಗಗನಕೆ
ಮೊಸಹೋಯಿತು ಎನ್ನುತ್ತ ವಿಕ್ರಮ ರಾಯ ಬಲು ಕ್ಲೇಶ ಗೊಳುತ ಮನದಿ.

ದೇಶ ಕೋಶಗಳೇಲ್ಲಾ ಅಳಲಿ ಬಳಲಿ ಒಬ್ಬ ವೈಶ್ಯನ್ನ ಸುತೆಯಿಂದ
ವಿಕ್ರಮ ರಾಯಗೆ ಇಂದು ರತ್ನದ ಹಾರವ ಇವನು ಕದ್ದ ಎಂದು ತಂದೆಗೆ ಪೇಳಲು
ಬಿಣ್ಣಿಸಿ ಬಹುಬಗೆ ಇಂದ ರಾಜೇ ಗೆ ಪೇಳೇ
ಬಂದು ತೋರಲು ಚರರು ಬಂದೆಳೆ ದೈತ್ಯರು
ಏಕೆ ಕಾದ್ದೆಯೋ ಹಾರವ ಬೇಗನೆ ಕೊಟ್ಟು ಜೋಕೆ ಇಂದಲ್ಲಿ ಪೊಗಯ್ಯ.

ನಾಕಾಣೆ ಹಾರವ ಯಾಕೆ ಕೊಲ್ಲುವೆರೆನ್ನ
ಚಂದ್ರ ಶೇಖರ ನಾಣೆಗೂ ಕದ್ದವ ನಾನಲ್ಲಾ
ಕೂಳ ಇವನ ನೋಡದೆ ಕೊರೆಗೆ ವೈದು ಹಾಳೆರಿಯ ಮದ್ಯದಿ
ಕಾಲು ಕೈಗಳು ಕೊಯ್ದು ಬೀಳಿಸಿ ಬನೀರೆಂದು ಹೇಳಿದಂದದಿಮಾಡಿ ಊರ ಸೇರಿದರಾಗ

ಅನ್ನ ಆಹಾರ ಕಾಣದೇ ವಿಕ್ರಮರಾಯ ಮುಂದೇನು ಗತಿ ಎನಗೆ
ಏನ್ನ ಪಾಲಿಸು ಶನಿ ಮಹರಾಯ ಏನುತಾಲಿ ಬಣ್ಣಿಸಿ ಮನದಲ್ಲಿ ಧ್ಯಾನವ ಮಾಡಿದ
ತೇಲಿ ಸೊಸೆ ಎಂಬುವಳು ಮನೆಗೆ ಒಯ್ದು ಪಾಲಿಸು ತಿದ್ದಾಳು
ಬಾಲೇ ಪ್ರಭಾವತಿ ಮಾಲೆಯ ಹಾಕಲು
ಕಾಲು ಕೈಗಳು ಬೆಳೆದು ವೈಶ್ಯಗಳಿಯನಾದ ತನ್ನ ಪುರವ ಸೇರಿದ.
ವಿಕ್ರಮ ರಾಯ ಚೆನ್ನಾಗಿ ಸುಖಬಾಳಿದ.
ಬಣ್ಣದಿಂದಲಿ ಬರೆದೊದಿದವರೆಗೆ ಇಷ್ಟ್ರತ್ತವ ಚೆನ್ನಾಗಿ ಕೊಡುವಂತ ಶನಿ ಮಹಾರಾಯಗೆ

ಮಂಗಳಾರತಿ ಎತ್ತರೆ .

ಕಲಿ ಕಾರ್ಕೋಟಕ ನಾಗಷ್ಯ ನಳ ದಮಯಂತಿ ಈ ಐವರ ಸ್ತೋತ್ರಂ ಸಂಪೂರ್ಣಂ.

No comments:

Post a Comment